• December 10, 2021

ಪುನೀತ್ ಸರ್ ಇಲ್ಲದ ಕರ್ನಾಟಕ ನನಗೆ ಶೂನ್ಯ ಅನ್ನಿಸುತ್ತೆ ಎಂದ ಜ್ಯೂ ಎನ್ ಟಿ ಆರ್

ಪುನೀತ್ ಸರ್ ಇಲ್ಲದ ಕರ್ನಾಟಕ ನನಗೆ ಶೂನ್ಯ ಅನ್ನಿಸುತ್ತೆ ಎಂದ ಜ್ಯೂ ಎನ್ ಟಿ ಆರ್

ಬೆಂಗಳೂರಿನಲ್ಲಿ ಆರ್ ಆರ್ ಆರ್ ಸಿನಿಮಾ‌ ಸುದ್ದಿಗೋಷ್ಠಿ ನಡೆದಿದೆ..ಕಾರ್ಯಕ್ರಮದಲ್ಲಿ ನಟಿ ಅಲಿಯಾ ಭಟ್, ಜ್ಯೂ. ಎನ್ ಟಿ ಆರ್, ರಾಮ್ ಚರಣ್ ತೇಜಾ, ಹಾಗೂ ರಾಜಮೌಳಿ ಭಾಗಿಯಾಗಿದ್ರು…ಸಿನಿಮಾ‌ ಬಗ್ಗೆ ಮಾತಾಡೋ‌‌ಮುಂಚೆ ಚಿತ್ರತಂಡ ‌ಪುನೀತ್ ರಾಜ್ ಕುಮಾರ್ ನೆನೆದು ಒಂದು ನಿಮಿಷ ಮೌನಾಚರಣೆ ಮಾಡಿ ಸುದ್ದಿಗೋಷ್ಠಿ ಆರಂಭ‌ ಮಾಡಿದ್ರು…

ಇನ್ನು‌ಅಪ್ಪು‌ಜೊತೆ‌ ಉತ್ತಮ‌ ಸ್ನೇಹ‌ ಸಂಬಂದ ಹೊಂದಿರೋ‌ ಜ್ಯೂ ಎನ್ ಟಿ ಆರ್ ಪುನೀತ್ ಸರ್ ಇಲ್ಲದ ಕರ್ನಾಟಕ ನನಗೆ ಶೂನ್ಯ ಅನ್ನಿಸುತ್ತೆ ಎಂದ್ರು‌..
ಅವರ ಬ್ಲೆಸ್ಸಿಂಗ್ ನನ್ನ ಮೇಲೆ ಇರಬೇಕು ಅಂತ ಪ್ರಾರ್ಥನೆ ಮಾಡುತ್ತೇನೆ‌ ಎನ್ನುತ್ತಲೇ ಅವರಿಗಾಗಿ ಹಾಡಿದ್ದ ಹಾಡನ್ನು ಮತ್ತೆ ಹಾಡಿದ್ರು…

ಈ ಹಾಡು ನಾನು ಯಾವಾಗ್ಲು ಹಾಡುತೇನೆ.. ಇದು ನಾನು ಮೊದಲು ಮತ್ತು ಕೊನೆಯದಾಗಿ ಹಾಡೋ ಹಾಡು ಎಂದು ಗೆಳೆಯ ಗೆಳೆಯಾ ಸಾಂಗ್ ಹಾಡುವ ಮೂಲಕ ಪುನೀತ್‌ರನ್ನ ನೆನಪು‌ ಮಾಡಿಕೊಂಡ್ರು ಜ್ಯೂ. ಎನ್ ಟಿಆರ್..